ಬಂಟ್ವಾಳ :ತಾಲೂಕಿನ ಪುದು, ಕೊಡ್ಮಾಣ್ ಗ್ರಾಮದ ಹೊಯ್ಗೆಗದ್ದೆ ಶ್ರೀರಾಮ ಮಂದಿರದ ಹತ್ತನೇ ಪ್ರತಿಷ್ಠಾ ವರ್ಧಂತ್ಯುತ್ಸವವು ಜೂ. 01 ರಂದು ಆದಿತ್ಯವಾರ ಗಣಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಭಜನಾ ಕಾರ್ಯಕ್ರಮಗಳೊಂದಿಗೆ ಶ್ರೀರಾಮ ಮಂದಿರದಲ್ಲಿ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ
ಕಾರ್ಯಕ್ರಮದ ವಿವರ:
ಬೆಳಿಗ್ಗೆ ಗಂಟೆ 9-00ಕ್ಕೆ ಗಣಹೋಮ,10-30ರಿಂದ 'ಶ್ರೀ ಸತ್ಯನಾರಾಯಣ ಪೂಜೆ',ಮಧ್ಯಾಹ್ನ ಗಂಟೆ 12-30ಕ್ಕೆ ಮಹಾಪೂಜೆ,ಮಧ್ಯಾಹ್ನ ಗಂಟೆ 1-00ರಿಂದ
ಅನ್ನಸಂತರ್ಪಣೆ, ಅಪರಾಹ್ನ ಗಂಟೆ 3-00ರಿಂದ ಭಜನಾ ಕಾರ್ಯಕ್ರಮ ಸಂಜೆ ಗಂಟೆ 6-30ಕ್ಕೆ ಭಜನಾ ಮಂಗಳೋತ್ಸವ ಹಾಗೂ ಮಹಾಪೂಜೆ ನಡೆಯಲಿದೆ.











