ಬಂಟ್ವಾಳ : ಯಮಟೋ ಶೋಟೋಕನ್ ಕರಾಟೆ ಅಸೋಶಿಯೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ಬಂಟ್ವಾಳದ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಡೆದ ರಾಜ್ಯ ಮಟ್ಟದ ಆಹ್ವಾನಿತ ಕರಾಟೆ ಪಂದ್ಯಾಟದಲ್ಲಿ ಎಸ್.ವಿ.ಎಸ್. ದೇವಳಾ ಆಂಗ್ಲ ಮಾಧ್ಯಮ ಶಾಲೆಯ 21 ವಿದ್ಯಾರ್ಥಿಗಳು ಭಾಗವಹಿಸಿದ್ದು ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ 8 ಚಿನ್ನ, 10 ಬೆಳ್ಳಿ ಹಾಗೂ 5 ಕಂಚಿನ ಪದಕಗಳನ್ನು ಗಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಭಾಮಿ ನಾಗೇಂದ್ರನಾಥ್ ಶೆಣೈ, ಶಾಲಾ ಮುಖ್ಯ ಶಿಕ್ಷಕಿ ರೋಶನಿ ತಾರಾ ಡಿಸೋಜ, ಸಹ ಮುಖ್ಯ್ಯೊಪಾಧ್ಯಾಯಿನಿ ಜಾನಕಿ ರಾಜೇಶ್, ಕರಾಟೆ ತರಗತಿಯ ಉಸ್ತುವಾರಿ ಭವ್ಯ ಹಾಗೂ ವಿಜೇತ, ಕರಾಟೆ ತರಬೇತುದಾರರಾದ ರೆನ್ಸಿ ಜೆರಾಲ್ಡ್ ಫೆರ್ನಾಂಡಿಸ್ ಪೇದಮಲೆ, ಸಹ ತರಬೇತುದಾರರಾದ ಸೆನ್ಸಾಯಿ ವಿಜಯ್ ಫೆರ್ನಾಂಡಿಸ್ ಹಾಗೂ ಸೆನ್ಸಾಯಿ ಜೇಸನ್ ಮನೀಷ್ ಉಪಸ್ಥಿತರಿದ್ದರು.