Coastal Bulletin

ಬೆಳ್ತಂಗಡಿ : ಶಬರಿಮಳೆಗೆ ಹೋಗುತ್ತಿದ್ದ ಮಿನಿ ಬಸ್ ಬ್ರೇಕ್ ಪೈಲ್‌ಆಗಿ ಅರಣ್ಯಕ್ಕೆ ನುಗ್ಗಿದ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕಾಪು ಚಡವು‌ ಉಳ್ಳಾಲ್ತಿ ಕಟ್ಟೆ ಬಳಿ‌ ನಡೆದಿದೆ.

ಈ ಮಿನಿ ಬಸ್ ನಲ್ಲಿ 21 ಜನರು ಇದ್ದಿದ್ದು, ಅದರಲ್ಲಿ ಮೂವರಿಗೆ  ಗಂಭೀರ ಗಾಯವಾಗಿದ್ದು, ಅವರನ್ನು ಮಂಗಳೂರಿಗೆ ಸಾಗಿಸಲಾಗಿದೆ. ಇಬ್ಬರನ್ನು ಎಸ್.ಡಿ.ಎಮ್ ಆಸ್ಪತ್ರೆಗೆ ದಾಖಲಿಸಿದ್ದು,

15 ಜನ ಕಕ್ಕಿಂಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಥಳಕ್ಕೆ ಆರು ಅಂಬುಲೆನ್ಸ್ ಆಗಮಿಸಿದ್ದು, ಬೆಳ್ತಂಗಡಿ ಸಂಚಾರಿ ಪೋಲಿಸರು ಹಾಗೂ ಸ್ಥಳೀಯರು ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. 

Leave a Comment