ಬಾರಕೂರು :ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ ಶ್ರೀ ಬಬ್ಬುಸ್ವಾಮಿ ಮೂಲ ಕ್ಷೇತ್ರದ ಜಾತ್ರಾಮಹೋತ್ಸವವು ಜ.20 ರಿಂದ ಜ.24 ರವೆರೆಗೆ ಶ್ರೀ ಕ್ಷೇತ್ರ ಕಚ್ಚೂರಿನಲ್ಲಿ ನಡೆಯಲಿದೆ.
ಜ.20 ರಂದು ಹಸಿರು ಹೊರಕಾಣಿಕೆ ಮೆರವಣಿಗೆ ನಡೆಯಲಿದೆ.ಜ.21 ಸಂಜೆ 7.30 ರಿಂದ ಶ್ರೀ ಭ್ರಾಮರಿ ನಾಟ್ಯಾಲಯ ಅಮ್ಮಂಜೆ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ.
ರಾತ್ರಿ 9.30 ಕ್ಕೆ ಸರಿಯಾಗಿ ರಂಗ ಸುದರ್ಶನ ರಿ ಸಹಿತ್ಲು ಇವರಿಂದ ಮಾಯೊದ ದೇವೊಂಗೊಲು ಎಂಬ ತುಳು ನಾಟಕ ಇರಲಿದೆ. ನಂತರ 12 ಗಂಟೆಗೆ ಗೆಂಡೋತ್ಸವ, ಕರೆಂಬಳ್ಳಿ ಶ್ರೀ ವೆಂಕಟಮಣ ಯಕ್ಷಗಾನ ಕಲಾಮಂಡಳಿ ವತಿಯಿಂದ ಯಕ್ಷಗಾನ ನಡೆಯಲಿದೆ.
ಜ.22
ರಂದು ಬೆಳಗ್ಗೆ 11 ಗಂಟೆಗೆ ಸಾಮೂಹಿಕ ವಿವಾಹ ಜರಗಲಿದೆ. ನಂತರ ಮಧ್ಯಾಹ್ನ 12.30 ಕ್ಕೆ ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ಮತ್ತು ಸಹಾಯಧನ ವಿತರಣಾ ಸಮಾರಂಭ ನಡೆಯಲಿದೆ. 3.30 ಕ್ಕೆ ಸರಿಯಾಗಿ ರಥೋತ್ಸವ ಜರಗಲಿದೆ.
ಜ.23 ರಂದು ಬೆಳಗ್ಗೆ 10 ಗಂಟೆಗೆ ತುಲಾಭಾರ ಸೇವೆ ನಡೆಯಲಿದೆ.ಜ.24 ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಕೊರಗಜ್ಜ ದೈವದ ದರ್ಶನ ಸೇವೆ ಜರಗಲಿದೆ ಎಂದು ಆಡಳಿತ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.















