ಬಂಟ್ವಾಳ :ತಾಲೂಕಿನ ಕೊಡ್ಮಾಣ್-ಪುದು ಗ್ರಾಮದ ಕಾಪಿಕಾಡ್ ಎಂಬಲ್ಲಿ ನವಜ್ಯೋತಿ ಯುವಕ ಸಂಘದ 8ನೇ ವಾರ್ಷಿಕೋತ್ಸವವು ಎ.19ರಂದು ಶನಿವಾರ ಕಾಪಿಕಾಡ್ ಮೈದಾನದಲ್ಲಿ ನಡೆಯಲಿದೆ.
ಅಂದು ಸಂಜೆ 4-30ಗೆ ಮಾತೃ ಪೂಜನ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಸಸಿಹಿತ್ಲು ಶ್ರೀ ಭಗವತಿ ಮೇಳದವರಿಂದ "ಕಾಲ್ಜಿಗದ ಸತ್ಯ" ಎಂಬ ಕಾಲ
ಮಿತಿ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ, 6 30ಗೆ ಚೌಕಿ ಪೂಜೆ ನಡದು, ಮಹಾಪೂಜೆಯ ನಂತರ ಅನ್ನಸಂತರ್ಪಣೆ ಜರುಗಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














