ಬಂಟ್ವಾಳ: ಬಂಟ್ವಾಳ ತಾಲೂಕು ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘ (ರಿ.) ಜೋಡುಮಾರ್ಗ ಇದರ ನೇತೃತ್ವದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ 131ನೇ ಜನ್ಮ ದಿನಾಚರಣೆ ಪ್ರಯುಕ್ತ ಬಂಟ್ವಾಳ ಸರಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ಮತ್ತು ಬ್ರೆಡ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೆ.ಸತೀಶ್ ಅರಳ,ಗೌರವಾಧ್ಯಕ್ಷರಾದ ಜನಾರ್ದನ ಬೋಳಂತೂರು, ಕಾರ್ಯಾಧ್ಯಕ್ಷರಾದ ರಾಜಾ ಚೆಂಡ್ತಿಮಾರ್,ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೃಷ್ಣಾಪುರ,ಖಜಾಂಚಿ ಶ್ರೀನಿವಾಸ್ ಆರ್ಬಿಗುಡ್ಡೆ,ಜೊತೆ ಕಾರ್ಯದರ್ಶಿಯಾದ ಸಂತೋಷ್ ಭಂಡಾರಿಬೆಟ್ಟು. ಉಪಾಧ್ಯಕ್ಷರಾದ ಪಿ.ಕೇಶವ ನಾಯ್ಕ , ಕೃಷ್ಣಪ್ಪ
ಪುದ್ದೋಟ್ಟು, ಕ್ರೀಡಾಧ್ಯಕ್ಷರಾದ ಚಂದ್ರಹಾಸ್ ಆರ್ಬಿಗುಡ್ಡೆ, ಗೌರವ ಸಲಹೆಗಾರರಾದ ನಾರಾಯಣ ಬಂಗೇರ ಕೃಷ್ಣಾಪುರ , ಸಂಘಟನಾ ಕಾರ್ಯದರ್ಶಿ ಉಮೇಶ್ ಕೃಷ್ಣಾಪುರ, ಸಾಮಾಜಿಕ ಜಾಲತಾಣ ಉಸ್ತುವಾರಿಗಳಾದ ಪ್ರೇಮ್ ರಾಜ್ ದ್ರಾವಿಡ್ ಪಲ್ಲಮಜಲು, ರಕ್ಷಿತ್ ಸರಪಾಡಿ. ಮೊದಲಾದವರು ಉಪಸ್ಥಿತರಿದ್ದರು.













