ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘ(ರಿ) ನೂತನ ಅಧ್ಯಕ್ಷರಾಗಿ ಬಿ ರಮೇಶ್ ಸಾಲಿಯಾನ್, ಕಾರ್ಯದರ್ಶಿ  ಎಸ್ ಸತೀಶ್ ಸಂಪಾಜೆ.

Coastal Bulletin
ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘ(ರಿ) ನೂತನ ಅಧ್ಯಕ್ಷರಾಗಿ ಬಿ ರಮೇಶ್ ಸಾಲಿಯಾನ್, ಕಾರ್ಯದರ್ಶಿ  ಎಸ್ ಸತೀಶ್ ಸಂಪಾಜೆ.

ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘ(ರಿ)ಇದರ 2026-28ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ದ್ವಿತೀಯ ಬಾರಿಗ ಬಿ ರಮೇಶ್ ಸಾಲಿಯಾನ್ ಸಂಚಯಗಿರಿ, ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ  ಎಸ್ ಸತೀಶ್ ಸಂಪಾಜೆ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷ ರಾಗಿ  ಗಣೇಶ್ ಮರ್ದೋಳಿ ಜೊತೆ ಕಾರ್ಯದರ್ಶಿಗಳಾಗಿ ಜಯಂತ್ ವಗ್ಗ ಹಾಗೂ  ಪ್ರೇಮಾ ಜನಾರ್ಧನ್ ಪೊಸಳ್ಳಿ, ತೃತೀಯ ಬಾರಿಗೆ ಆಯ್ಕೆಯಾದ ಕೋಶಾಧಿಕಾರಿ  ಸೋಮನಾಥ್ ಸಾಲಿಯಾನ್, ಸಂಘಟನಾ ಕಾರ್ಯದರ್ಶಿ ಆಶಾ ಗಿರಿಧರ್ , ಸೇವಾ ದಳಪತಿ ಚಂದ್ರ ಶೇಖರ್, ಮಹಿಳಾ ಸಂಘದ ಅಧ್ಯಕ್ಷೆಯಾಗಿ ವಾರಿಜಾ ಚೇತನ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮಚ್ಚೇಂದ್ರ ಸಾಲಿಯಾನ್, ಜಲಜಾಕ್ಷಿ ಕುಲಾಲ್,  ಜನಾರ್ಧನ ಬೊಂಡಾಲ, ರಮೇಶ್ ಸಾಲಿಯಾನ್ ಗುರುಕೃಪಾ, ಮಾಧವ ಕುಲಾಲ್

ಬಿ.ಸಿ ರೋಡ್, ಕವಿತಾ ಯಾದವ್ ಅಗ್ರಬೈಲ್,  ಸುರೇಶ್ ಕುಲಾಲ್ ಬಂಟ್ವಾಳ ಇವರ ಆಯ್ಕೆ ಪ್ರಕ್ರಿಯೆ ನಡೆಯಿತು.

ಗೌರವ ಸಲಹೆಗಾರರಾಗಿ ಮಚ್ಚೇಂದ್ರ ಸಾಲ್ಯಾನ್ , ಮಾಧವ ಕುಲಾಲ್ ಬಿ.ಸಿ.ರೋಡು, ಜಲಜಾಕ್ಷಿ ಕುಲಾಲ್ ಸಹಕರಿಸಿದರು.

ಸರ್ಕಾರದ ಅನುದಾನವನ್ನು ತರುವಲ್ಲಿ ಶ್ರಮವಹಿಸಿದ ಕಟ್ಟಡ ಸಮಿತಿಯ ಅಧ್ಯಕ್ಷರಾದ  ನ್ಯಾಯವಾದಿ ಸುರೇಶ್ ಕುಮಾರ್ ನಾವೂರರಿಗೆ ಈ ಸಭೆಯಲ್ಲಿ ಹೂ ಗುಚ್ಛ ನೀಡಿ ಅಭಿನಂದಿಸಲಾಯಿತು.

ಸಭೆಯ ಬಳಿಕ ಶ್ರೀ ಜಯಂತ ಕುಲಾಲ್ ವಗ್ಗ ಧನ್ಯವಾದ ನೀಡಿದರು.

Leave a Comment