ಬಂಟ್ವಾಳ :ಸ್ವಾಮಿ ವಿವೇಕಾನಂದ ಯುವಕ ಸಂಘ ( ರಿ ) ಮತ್ತು ಅಯ್ಯಪ್ಪ ಮಂದಿರ, ಮೊಡಂಕಾಪು ಇದರ ಅಧ್ಯಕ್ಷರಾಗಿ ಸುನಿಲ್ ಕುಂದರ್ ಮೊಡಂಕಾಪು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೆ. 10 ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 2023 -24ನೇ ಸಾಲಿಗೆ ಸ್ವಾಮಿ ವಿವೇಕಾನಂದ ಯುವಕ ಸಂಘ (ರಿ) ಅಯ್ಯಪ್ಪ ಮಂದಿರ ಮೊಡಂಕಾಪು ಇದರ ನೂತನ ಪದಾಧಿಕಾರಿಗಳ
ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾಗಿ ಭುವನೇಶ್ ಪಚ್ಚಿನಡ್ಕ,ಪ್ರಧಾನ ಕಾರ್ಯದರ್ಶಿಯಾಗಿ ರವೀಂದ್ರ .ಕೆ .ಉಪಾಧ್ಯಕ್ಷರಾಗಿ ಜಯಪ್ರಕಾಶ್. ಪಲ್ಲಮಜಲು
ಕೋಶಾಧಿಕಾರಿಯಾಗಿ ರಾಜೇಶ್ ಪರ್ಲಕೆ, ಜತೆ ಕಾರ್ಯದರ್ಶಿಯಾಗಿ ಗಣೇಶ್ ಎನ್ ಪೂಂಜರ ಕೊಡಿ ಇವರುಗಳ ಆಡಳಿತ ಮಂಡಳಿಯನ್ನು ರಚಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.















