ಬಂಟ್ವಾಳ :ಸ್ವಾಮಿ ಶ್ರೀ ಕೊರಗಜ್ಜ ಪೀಠ ಐನೂರ ಪಳಿಕೆ , ಸರಸ್ವತಿ ನಗರ, ಪಕ್ಕಳಪಾದೆ, ಮೇರಮಜಲು, ಇಲ್ಲಿ ಮೇ.10ರಂದು ನಡೆಯಲಿರುವ ಶ್ರೀ ಸ್ವಾಮಿ ಕೊರಗ ತನಿಯ ದೈವದ ಶಿಲಾ ಪ್ರತಿಷ್ಠೆ, ನವಕ ಕಲಶಾಭಿಷೇಕ ಹಾಗೂ ಗಗ್ಗರ ಸೇವೆಯ ಆಮಂತ್ರಣ ಪತ್ರಿಕೆಯನ್ನು ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ಯಶಸ್ಸಿಗಾಗಿ ಮುಂದಿನ ವ್ಯವಸ್ಥೆಯ ಬಗ್ಗೆ ಹಿರಿಯರ ಮಾರ್ಗದರ್ಶನದಲ್ಲಿ ಸರ್ವ ಸದಸ್ಯರೊಂದಿಗೆ ಸಮಾಲೋಚನೆ ನಡೆಸಲಾಯಿತು.













