ಮಾರಿಪಲ್ಲ : ಕುಲಾಲ ಸೇವಾದಳ ಸಮಿತಿ ರಚನಾ ಸಭೆ, ಪದಾಧಿಕಾರಿಗಳ ಆಯ್ಕೆ.

Coastal Bulletin
ಮಾರಿಪಲ್ಲ : ಕುಲಾಲ ಸೇವಾದಳ ಸಮಿತಿ ರಚನಾ ಸಭೆ, ಪದಾಧಿಕಾರಿಗಳ ಆಯ್ಕೆ.

ಬಂಟ್ವಾಳ :ತಾಲೂಕಿನ ಪುದು ಗ್ರಾಮದ ಕುಲಾಲ ಸುಧಾರಕ ಸಂಘ ನಾಣ್ಯ ಇದರ ಸೇವಾ ದಳ ರಚನಾ ಸಭೆಯು ಕುಲಾಲ ಸಮುದಾಯ ಭವನ ನಾಣ್ಯದಲ್ಲಿ ಡಿ 8ರಂದು ಆದಿತ್ಯವಾರ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅರ್ಕುಲ ಶ್ರೀರಾಮ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ದೇವದಾಸ ಕೆ ಅರ್ ಮಾತನಾಡಿ, ಸಂಘಟನೆಯಿಂದ ಸಮಾಜಮುಖಿ ಕೆಲಸ ಮಾಡಲು ಸಾಧ್ಯ, ಈ ನಿಟ್ಟಿನಲ್ಲಿ ಕುಲಾಲ ಸಮಾಜದ ಯುವಕರು ಸೇವಾದಳದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಕುಲಾಲ ಸಮಾಜದ ಉನ್ನತಿಗೆ ಹಾಗೂ ಸದೃಢ ಸಮಾಜ ನಿರ್ಮಾಣಕ್ಕಾಗಿ ಮುಂದೆ ಬರಬೇಕು ಎಂದು ಹೇಳಿದರು.

ಸಂಘಟನಾ ಕಾರ್ಯದರ್ಶಿ ನವೀನ ಕೊಡ್ಮಾಣ್ ಚಾಪೆ ಸೇವಾದಳ ಸಮಿತಿ ರಚನೆಯ ಬಗ್ಗೆ ಮಾಹಿತಿ ನೀಡಿದರು.

ಪ್ರಮುಖರಾದ

ಕುಲಾಲ ಸುಧಾರಕ ಸಂಘದ ಅಧ್ಯಕ್ಷೆ ಕಮಲ ರಮೇಶ್, ಉಪಾಧ್ಯಕ್ಷ ಸುರೇಶ ಕುಲಾಲ್ ನೆತ್ತರಕೆರೆ, ಹಿರಿಯರಾದ ಆನಂದ ಅಡ್ಯಾರ್, ಕೋಶಾಧಿಕಾರಿ ವಿನಯ ಕುಮಾರ್ ಕಡೆಗೋಳಿ ಮತ್ತಿತರರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ 2024-25ರ ನೂತನ ಸೇವಾದಳದ ಪದಾಧಿಕಾರಿಗಳ ಆಯ್ಕೆ ನಡೆಯಿತು.


ನೂತನ ದಳಪತಿಯಾಗಿ ಸುದೇಶ್ ಗಂಪದಕೊಡಿ ಹಾಗೂ ಕಾರ್ಯದರ್ಶಿ ಸಂದೀಪ ನಾಣ್ಯ ಆಯ್ಕೆಯಾದರು.ವಿವಿಧ ಸ್ಥಳಗಳಿಗೆ ಉಪ ದಳಪತಿ ಹಾಗೂ ಕಾರ್ಯದರ್ಶಿಗಳನ್ನುಈ ಸಂದರ್ಭದಲ್ಲಿ ನೇಮಿಸಲಾಯಿತು.

Leave a Comment