ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರಿಗೆ 36 ಜನರ ಲಿಸ್ಟ್‌ ರೆಡಿ – ಪೊಲೀಸರಿಂದ ಕಾನೂನು ಪ್ರಕ್ರಿಯೆ ಶುರು!

Coastal Bulletin
ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರಿಗೆ 36 ಜನರ ಲಿಸ್ಟ್‌ ರೆಡಿ – ಪೊಲೀಸರಿಂದ ಕಾನೂನು ಪ್ರಕ್ರಿಯೆ ಶುರು!

ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಕೋಮು ಗಲಭೆ ಹಿನ್ನಲೆಯಲ್ಲಿ ಒಟ್ಟು 36 ಜನರ ಗಡಿಪಾರಿಗೆ ಪೊಲೀಸ್‌ ಇಲಾಖೆ ಕಾನೂನು ಪ್ರಕ್ರಿಯೆ ಶುರು ಮಾಡಿದೆ.

ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ವಿಟ್ಲ, ಸುಳ್ಯ, ಬೆಳ್ಳಾರೆ, ಬೆಳ್ತಂಗಡಿ, ಪುಂಜಾಲಕಟ್ಟೆ, ಕಡಬ, ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿನ 15 ಜನ ಮುಸ್ಲಿಮರು ಸೇರಿದಂತೆ ಒಟ್ಟು 36 ಜನರನ್ನ ಗಡಿಪಾರು ಮಾಡಲು ಪೊಲೀಸ್‌ ಇಲಾಖೆ ಮುಂದಾಗಿದೆ.

ಸಾಲು ಸಾಲು ಹತ್ಯೆಗಳಿಂದ ಪ್ರಕ್ಷುಬ್ಧಗೊಂಡಿದ್ದ ದಕ್ಷಿಣ ಕನ್ನಡದಲ್ಲೀಗ.. ಆಪರೇಷನ್ ಶಾಂತಿ ಶುರುವಾಗಿದೆ. ಮಂಗಳೂರಿನಲ್ಲಿ ಕಳೆದ ವಾರ ಮುಸ್ಲಿಂ ಯುವಕ ಅಬ್ದುಲ್ ರಹಿಮಾನ್ ಹತ್ಯೆ ಬಳಿಕ ದಕ್ಷಿಣ ಕನ್ನಡ ಸ್ವಲ್ಪಮಟ್ಟಿಗೆ ಉದ್ವಿಗ್ನಗೊಂಡಿತ್ತು. ಬೆನ್ನಲ್ಲೇ ಮಂಗಳೂರು ಕಮಿಷನರ್, ದಕ್ಷಿಣ ಕನ್ನಡ ಎಸ್‌ಪಿಯನ್ನು ಸರ್ಕಾರ ಬದಲಿಸಿತ್ತು. ಇದೀಗ ಆರೋಪಿಗಳಿಗೆ ಸಹಕರಿಸುವ, ಆಶ್ರಯ ನೀಡುವ ಎಲ್ಲರನ್ನೂ ನಾವು ಆರೋಪಿಗಳೇ ಎಂದು ಪರಿಗಣಿಸುತ್ತೇವೆ ಅಂತ ಇಬ್ಬರೂ ಎಚ್ಚರಿಕೆ ಕೊಟ್ಟಿದ್ದರು.

ಗಡೀಪಾರಿಗೆ ಪ್ರಸ್ತಾವನೆ ಸಲ್ಲಿಸಿದವರ ಹೆಸರು ಮತ್ತು ಠಾಣಾ ವ್ಯಾಪ್ತಿ

ಬಂಟ್ವಾಳ ನಗರ ಠಾಣೆ: ಹಸೈನಾರ್(46), ಮಹಮ್ಮದ್ ಸಫಾನ್(26), ರಾಜು ಅಲಿಯಾಸ್ ರಾಜೇಶ್(35)

ಬಂಟ್ವಾಳ ಗ್ರಾಮಾಂತರ: ಭರತ್ ರಾಜ್ ಬಿ ಅಲಿಯಾಸ್ ಭರತ್ ಕುಮ್ಮೇಲು(38), ಪವನ್ ಕುಮಾರ್(33), ಚರಣ್ ಅಲಿಯಾಸ್ ಚರಣ್ ರಾಜ್(28), ಅಬ್ದುಲ್ ಲತೀಫ್(40), 'ಮಹಮ್ಮದ್ ಅಶ್ರಫ್(44), ಮೊಯ್ದಿನ್ ಅಮ್ನಾನ್ ಅಲಿಯಾಸ್ ಅದ್ದು(24)

ವಿಟ್ಲ ಠಾಣೆ: ಗಣೇಶ ಅಲಿಯಾಸ್ ಗಣೇಶ ಪೂಜಾರಿ(35), ಅಬ್ದುಲ್ ಖಾದರ್ ಅಲಿಯಾಸ್ ಸೌಕತ್(34), ಚಂದ್ರಹಾಸ(23)

ಪುಂಜಾಲಕಟ್ಟೆ ಠಾಣೆ: ಭುವಿ ಅಲಿಯಾಸ್ ಭುವಿತ್ ಶೆಟ್ಟಿ(35)

ಬೆಳ್ತಂಗಡಿ ಠಾಣೆ: ಮಹೇಶ್ ಶೆಟ್ಟಿ ತಿಮರೋಡಿ(53), ಅಶ್ರಫ್ ಬಿ ಅಲಿಯಾಸ್‌

ಗರಗಸ ಅಶ್ರಫ್ (43), ಮನೋಜ್ ಕುಮಾರ್(37)

ಪುತ್ತೂರು ನಗರ: ಅರುಣ್ ಕುಮಾರ್ ಪುತ್ತಿಲ(54), ಹಕೀಮ್ ಕೂರ್ನಡ್ಕ (38), ಅಜಿತ್ ರೈ (39), ಮನೀಶ್ ಎಸ್ (34), ಅಬ್ದುಲ್ ರಹಿಮಾನ್(38), 

ಪುತ್ತೂರು ಗ್ರಾಮಾಂತರ: ಕಿಶೋರ್ (34), ರಾಕೇಶ್ ಕೆ. (30) ನಿಶಾಂತ್ ಕುಮಾರ್(22)

ಕಡಬ ಠಾಣೆ : ಮಹಮ್ಮದ್ ನವಾಝ್(32 )

ಉಪ್ಪಿನಂಗಡಿ ಠಾಣೆ: ಸಂತೋಷ್ ಕುಮಾರ್ ರೈ ಅಲಿಯಾಸ್ ಸಂತು(35),

ಜಯರಾಮ(25), ಸಂಶುದ್ದೀನ್(36), ಸಂದೀಪ(24), ಮಹಮ್ಮದ್ ಶಾಕಿರ್(35), ಅಬ್ದುಲ್ ಅಝೀಜ್ ಅಲಿಯಾಸ್ ಕರಾಯ ಅಝೀಜ್(36)

ಸುಳ್ಯ ಠಾಣೆ : ಲತೇಶ್ ಗುಂಡ್ಯ(32), ಮನೋಹರ ಅಲಿಯಾಸ್ (32)

ಬೆಳ್ಳಾರೆ ಠಾಣೆ: ಪ್ರಸಾದ್(35), ಶಮೀರ್ ಕೆ(38)

ಚಿಕ್ಕಮಗಳೂರಿನಲ್ಲಿ 4 ಮಂದಿ ಗಡೀಪಾರಿಗೆ ಆದೇಶ

ನರಸಿಂಹರಾಜಪುರ ತಾಲೂಕಿನ ಮೂವರು ಮತ್ತು ತರೀಕೆರೆ ತಾಲೂಕಿನ ಓರ್ವ ಸಹಿತ ಜಿಲ್ಲೆಯಲ್ಲಿ 4 ಮಂದಿಯನ್ನು ಗಡೀಪಾರು ಮಾಡಲು ಜಿಲ್ಲಾಧಿಕಾರಿ ಸಿ.ಎನ್‌. ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ. ನರಸಿಂಹರಾಜಪುರ ತಾಲೂಕಿನ ಹಿಳುವಳ್ಳಿ ಇಂದಿರಾ ನಗರದ ಫೈಜುಲ್ಲಾ ಷರೀಫ್‌, ಮೇಗರಮಕ್ಕಿ ಕಿಚ್ಚಬ್ಬಿ ಪ್ರದೀಪ್, ನೇಮನಹಳ್ಳಿಯ ಮನೋ ರಂಜನ್‌ ಮತ್ತು ತರೀಕೆರೆ ತಾಲೂಕಿನ ಎಂ.ಸಿ. ಹಳ್ಳಿ ಮೌಂಟ್‌ಬ್ಯಾಟನ್ ಅವರನ್ನು ಜಿಲ್ಲೆಯಿಂದ ಗಡೀಪಾರಿಗೆ ಆದೇಶಿಸ ಲಾಗಿದೆ. ಅವರ ಮೇಲೆ ಸುಮಾರು 5ರಿಂದ 8 ಪ್ರಕರಣಗಳು ದಾಖಲಾಗಿದ್ದು, ಇವರು ಅಶಾಂತಿ ಮೂಡಿಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿಗಳ ವರದಿ ಆಧಾರದ ಮೇಲೆ ಗಡೀಪಾರಿಗೆ ಆದೇಶಿಸಿದೆ. ಇವರು ಗಡಿಪಾರಾದರೆ ಸುಮಾರು 6 ರಿಂದ 8 ತಿಂಗಳ ಕಾಲ ಜಿಲ್ಲೆಗೆ ಬರುವಂತಿಲ್ಲ.

Leave a Comment