ಮಂಗಳೂರು; ಮಂಗಳೂರು ಪೊಲೀಸರು ತಡರಾತ್ರಿ ಹಲವು ಪಿಎಫ್ ಐ ಕಾರ್ಯಕರ್ತರನ್ನು ಬಂಧನ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಪಿಎಫ್ಐ ನಾಯಕರ ಬಂಧನ ಖಂಡಿಸಿ ಪ್ರತಿಭಟಿಸಿದವರ ಮೇಲೆ 107 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಇಸ್ಮಾಯಿಲ್ ಎಂಜಿನೀರ್ ಬಜ್ಪೆ,ಷರೀಫ್ ಪಾಂಡೇಶ್ವರ ಇಕ್ಬಾಲ್ ಕೆತ್ತಿಕಲ್, ನೌಷಾದ್
ಸುರತ್ಕಲ್ ಸೇರಿ ಮಧ್ಯರಾತ್ರಿ ಹಲವರ ಬಂಧನವಾಗಿದೆ.ಪಿಎಫ್ ಐ ನಾಯಕರು ಯಾರೆಲ್ಲಾ ಮುಂದೆ ಹೋಗಿ ಮಾತನಾಡುತ್ತಾರೆ.ಅವರನ್ನೆಲ್ಲಾ ಸುಳ್ಳು ಕೇಸ್ ಹಾಕಿ ಪೊಲೀಸರು ಬಂಧಿಸುತ್ತಿದ್ದಾರೆ ಎಂದು ಪಿಎಫ್ ಐ ಆರೋಪಿಸಿದೆ.















