ಬಂಟ್ವಾಳ :ಕಳ್ಳಿಗೆ ಗುತ್ತು ಧರ್ಮಚಾವಡಿ ಶ್ರೀ ಕನಪಾಡಿತ್ತಾಯ ಧೂಮಾವತಿ ಬಂಟ ಹಾಗೂ ಪರಿವಾರ ದೈವಗಳ ಧರ್ಮ ನೆಮೋತ್ಸವದ ಪ್ರಯುಕ್ತ ಚಪ್ಪರ ಮೂಹೂರ್ತ ಕಾರ್ಯಕ್ರಮವು 19ನೇ ಆದಿತ್ಯವಾರ ಬೆಳಿಗ್ಗೆ 8.30ಕ್ಕೆ ಬ್ರಹ್ಮಶ್ರೀ ವೇದಮೂರ್ತಿ ಸುಬ್ರಮಣ್ಯ ತಂತ್ರಿಯವರ ನೇತೃತ್ವದಲ್ಲಿ ಕಳ್ಳಿಗೆ ಚಾವಡಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕಳ್ಳಿಗೆಗುತ್ತು ಚಾವಡಿಯ ಬೆಳ್ಳಿಪ್ಪಾಡಿ ರಮಾನಾಥ ರೈ, ಬೆಳ್ಳಿಪ್ಪಾಡಿ ರಾಜಶೇಖರ ರೈ ಕಳ್ಳಿಗೆಗುತ್ತು, ನಾರಾಯಣ ಹೊಳ್ಳ ನೆತ್ತರಕೆರೆ ಗುತ್ತು, ಇಂಜಿನಿಯರ್ ಡಾ. ಆನಂದ ಬಂಜನ್, ಧಾರ್ಮಿಕ ಪರಿಷತ್ ನ ಮಲ್ಲಿಕಾ ಪಕ್ಕಳ,
ದೇವಪ್ಪ ಕುಲಾಲ್, ಮಾಜಿ ಜಿ ಪಂ ಸದಸ್ಯರಾದ ಚಂದ್ರ ಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಸದಾನಂದ ಶೆಟ್ಟಿ ರಂಗೋಲಿ, ಜ್ಯೋತಿಂದ್ರ ಶೆಟ್ಟಿ ಮುಂಡಾಜೆ ಗುತ್ತು, ನಾಗೇಶ್ ಶೆಟ್ಟಿ ಪೆರಿಯೋಡಿ ಬೀಡು ಮತ್ತಿತರರು ಉಪಸ್ಥಿತರಿದ್ದರು.














