ಬಂಟ್ವಾಳ: ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ವತಿಯಿಂದ ಬಂಟ್ವಾಳದ ದಡ್ಡಲಕಾಡು ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮಗಳು ಇತ್ತೀಚೆಗೆ ನಡೆದವು.
10ನೇ ತರಗತಿ ವಿಧ್ಯಾರ್ಥಿಗಳಿಗೆ ಹಿರಿಯ ಪತ್ರಕರ್ತ ಹರೀಶ ಮಾಂಬಾಡಿ ಅವರು ಸಾಹಿತ್ಯದಿಂದ ಸಂಸ್ಕಾರಯುತ ಸಮಾಜ ಎಂಬ ವಿಚಾರದ ಕುರಿತು ನೀರ್ಕಜೆ ಸುಬ್ರಾಯ ಭಟ್ಟ ಮತ್ತು ಸಹೋದರರ ದತ್ತಿ ಉಪನ್ಯಾಸ ನೀಡಿದರು.
ನಿವೃತ್ತ ಮುಖ್ಯೋಪಾಧ್ಯಾಯ ಸಂಕಪ್ಪ ಶೆಟ್ಟಿ ಅವರು ಯಕ್ಷಗಾನದಲ್ಲಿ ಸಾಹಿತ್ಯ ವಿಚಾರದ ಕುರಿತು ಪಿ.ಕೆ.ವೆಂಕಟರಮಣ ಭಟ್
ದತ್ತಿ ಉಪನ್ಯಾಸವನ್ನು ನೀಡಿದರು.
ಪ್ರೌಢಶಾಲಾ ವಿಭಾಗ ಕಾರ್ಯಾಧ್ಯಕ್ಷ ಪುರುಷೋತ್ತಮ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ರಮಾನಂದ ನೂಜಿಪ್ಪಾಡಿ, ಕಸಾಪ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಪೂವಪ್ಪ ನೇರಳಕಟ್ಟೆ, ಇರಾ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಸೋನಿತಾ ಈ ಸಂದರ್ಭ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಕರಿಷ್ಮಾ ಸ್ವಾಗತಿಸಿದರು. ಅಶ್ವಿನಿ ಮೆಲ್ಕಾರ್ ವಂದಿಸಿದರು.
















