ಬಿ ಸಿ ರೋಡ್ : ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆ ಕಾರ್ಯಕ್ರಮ.

Coastal Bulletin
ಬಿ ಸಿ ರೋಡ್ : ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆ ಕಾರ್ಯಕ್ರಮ.

ಬಂಟ್ವಾಳ :ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ )ಬಂಟ್ವಾಳ ತಾಲೂಕು ಸಮಿತಿ,ಮತ್ತು ಬಂಟ್ವಾಳ ತಾಲೂಕು ಭಾರತರತ್ನ ಡಾ!! ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘ( ರಿ) ಅಂಚೆ ಜೋಡುಮಾರ್ಗ ಇದರ ವತಿಯಿಂದ ಎ.14ರಂದು ಆದಿತ್ಯವಾರ ಬಿ ಸಿ ರೋಡಿನ ರಕ್ತೇಶ್ವರಿ ದೇವಸ್ಥಾನದ ಸಭಾ ಭವನದಲ್ಲಿ ಭಾರತರತ್ನ ಡಾ!! ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು,

ಅಂಬೇಡ್ಕರ್ ಜನ್ಮ ದಿನಾಚರಣೆಯ ಅಂಗವಾಗಿ ಬಂಟ್ವಾಳ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನಾರೋಗ್ಯ ಪೀಡಿತರಿಗೆ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಹಣ್ಣು ಹಂಪಲುಗಳನ್ನು ಹಂಚಲಾಯಿತು, 

ಈ ಸಂದರ್ಭ ಬಂಟ್ವಾಳ ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಸಂತೋಷ್ ಭಂಡಾರಿಬೆಟ್ಟು, ಬಂಟ್ವಾಳ ತಾಲೂಕು ಭಾರತರತ್ನ ಡಾ!! ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಸೆರ್ಕಳ, ಗೌರವಾಧ್ಯಕ್ಷರಾದ ಜನಾರ್ಧನ ಬೋಳಂತೂರು, ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಅರ್ಬಿಗುಡ್ಡೆ ಮತ್ತು ಬಂಟ್ವಾಳ ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ಗೌರವ ಸಲಹೆಗಾರರಾದ ರಾಜ ಚೆಂಡ್ತಿಮಾರ್, ಮತ್ತು ಸದಸ್ಯರುಗಳಾದ ಕೇಶವ್ ನಾಯ್ಕ್, ಬಾಬು ದೊಂಪದಪಲ್ಕೆ, ವೆಂಕಟೇಶ್ ಕೃಷ್ಣಾಪುರ, ಮೋಹನ್ ಬಡಗಬೆಳ್ಳೂರು, ನಾರಾಯಣ ಬೊಂಡಾಲ, ರತೀಶ್ ಸರಪಾಡಿ, ಜಯಂತಿ ವಾಮದಪದವು, ಜಾನಕಿ ವಾಮದಪದವು, ಶೇಖರ್ ಬೀಯಪಾದೆ, ರವಿ ಬೀಯಪಾದೆ, ಸುರೇಶ್ ಅರ್ಬಿಗುಡ್ಡೆ, ಪ್ರೇಮ್ ರಾಜ್ ಪಲ್ಲಮಜಲು, ಹರೀಶ್ ಭಂಡಾರಿಬೆಟ್ಟು, ಚಂದ್ರಹಾಸ ಅರ್ಬಿಗುಡ್ಡೆ,ಶ್ರೀಮತಿ ವಿಮಲ ಅರ್ಬಿಗುಡ್ಡೆ, ವೀಕ್ಷಿತ ಅರ್ಬಿಗುಡ್ಡೆ, ಶ್ರೀಮತಿ ಗೀತಾ ಸರಪಾಡಿ, ಮೊದಲಾದವರು ಉಪಸ್ಥಿತರಿದ್ದರು, ಬಂಟ್ವಾಳ ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಉಮೇಶ್ ಕೃಷ್ಣಾಪುರ ಕಾರ್ಯಕ್ರಮ ನಿರೂಪಣೆ ಮಾಡಿದರು

Leave a Comment