ಬಂಟ್ವಾಳ : ಪಾಣೆಮಂಗಳೂರು ಪುರಸಭೆ ವ್ಯಾಪ್ತಿಯ 24ನೇ ವಾರ್ಡಿನ ಅಲಡ್ಕ ಬಂಗ್ಲೆಗುಡ್ಡೆ ಕೈಕಂಬ ಕ್ರಾಸ್ ಬಳಿ ನೂತನವಾಗಿ ಅಳವಡಿಸಿದ ಹೈಮಾಸ್ಟ್ ದೀಪದ ಉದ್ಘಾಟನೆಯನ್ನು ಮಾಜಿ ಸಚಿವ ಬಿ. ರಮಾನಾಥ ರೈ ನೆರವೇರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ಧಿಕ್ ಗುಡ್ಡೆಯಂಗಡಿ, ವಲಯ ಅಧ್ಯಕ್ಷ ಇಕ್ಬಲ್ ಜೆ ಟಿ ಟಿ, ಅಬ್ದುಲ್ ಮುತ್ತಲಿಪ್
ಪಾಣೆಮಂಗಳೂರು, ಮೋಹಿದೀನ್ ಜುಮಾ ಮಸೀದಿಯ ಅಧ್ಯಕ್ಷರು ಅಬ್ದುಲ್ ರಹಿಮಾನ್, ಮೋನಾಕ್ಕ, ಜಿ ಎಂ ಅಬ್ದುಲ್ ಖಾದರ್ ಹಾಗೂ ಊರಿನ ಸರ್ವ ನಾಗರಿಕರು ಉಪಸ್ಥಿತರಿದ್ದರು.











