ಬಂಟ್ವಾಳ: ಇಲ್ಲಿನ ಬಂಟ್ವಾಳ_ ಮೂಡುಬಿದಿರೆ ಮುಖ್ಯ ರಸ್ತೆ ನಡುವಿನ ಕುದ್ಕೋಳಿ ತಿರುವು ರಸ್ತೆಯಲ್ಲಿ ಮಿನಿ ಬಸ್ ಡಿಕ್ಕಿಯಾಗಿ ಬೈಕ್ ಸವಾರಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ
ಮೃತರನ್ನು ಮೂಡುಮಾರ್ನಾಡು ಕುಕ್ಕುದಪಲ್ಕೆ ನಿವಾಸಿ, ವಿಘ್ನೇಶ್ವರ ಯುವಕ ಮಂಡಲದ ಅಧ್ಯಕ್ಷ ಗಣೇಶ್ (28) ಎಂದು ಗುರುತಿಸಲಾಗಿದೆ. ಇವರು ಕಾರ್ಯಕ್ರಮವೊಂದಕ್ಕೆ ಬಂದು ವಾಪಾಸಾಗುತ್ತಿದ್ದ
ವೇಳೆ ಈ ಅಪಘಾತ ನಡೆದಿದ್ದು, ಮೆಸ್ಕಾಂ ಬಿಲ್ ರೀಡರ್ ಮತ್ತು ಹೋಟೆಲ್ ನಲ್ಲಿ ಕೆಲಸ ಮಾಡುತಿದ್ದರು ಎಂದು ಸಂಚಾರಿ ಠಾಣೆ ಪೊಲೀಸರು ತಿಳಿಸಿದ್ದಾರೆ.














