ಬಂಟ್ವಾಳ :ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಇದರ ಅಷ್ಟಬಂಧ ಬ್ರಹ್ಮಕಲಶ ಪ್ರಯುಕ್ತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಇಂದು ದೇವಸ್ಥಾನದ ರಾಜಾಂಗಣದಲ್ಲಿ ನಡೆಯಿತು. ಬೆಳಿಗ್ಗೆ ಪೂಜೆ ಬಳಿಕ ದೇವಸ್ಥಾನದಲ್ಲಿ ಬ್ರಹ್ಮಕಲಶದ ಯಶಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸಲಾಯಿತು. ಬಳಿಕ ಆಮಂತ್ರಣ ಬಿಡುಗಡೆ ಸಮಾರಂಭ ನಡೆಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಉಪಾಧ್ಯಾಯ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ರಂಗೋಲಿ, ಸಂಚಾಲಕ ತೇವು ತಾರನಾಥ ಕೊಟ್ಟಾರಿ, ಗೌರವಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಸುವರ್ಣ ತುಂಬೆ, ಕೋಶಾಧಿಕಾರಿ ಕವಿರಾಜ್ ಚಂದ್ರಿಗೆ, ಸುಬ್ರಹ್ಮಣ್ಯ ಭಟ್ ದೇವಂದಬೆಟ್ಟು, ಅರ್ಚಕ ರಾಧಾಕೃಷ್ಣ ಕಡಂಬಳಿತ್ತಾಯ, ಕನಪಾಡಿ ದೈವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮಾನಾಥ ರೈ ಕುಪ್ಪಿಲಗುತ್ತು, ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ರಾಮಕೃಷ್ಣ ಆಳ್ವ ಪೊನ್ನೋಡಿ, ರಾಘವ ಕಾರಂತ ಕನಪಾಡಿ, ನಾರಾಯಣ ಹೊಳ್ಳ ನೆತ್ತರಕೆರೆ, ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ದಾಮೋದರ ನೆತ್ತರಕೆರೆ, ಸದಸ್ಯರಾದ ಸತೀಶ್ ಶೆಟ್ಟಿ ಮೊಡಂಕಾಪು, ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಅಮಿತಾ ವಿಶ್ವನಾಥ್ ದಾಸರಕೋಡಿ, ಉಮಾ ಲಿಂಗಪ್ಪ ಕುಲಾಲ್ ತುಂಬೆ, ಪ್ರಮುಖರಾದ ಉಮಾ ಚಂದ್ರಶೇಖರ್ ಕಡೆಗೋಳಿ, ಕೆ.ಪಿ. ಶೆಟ್ಟಿ ಮೊಡಂಕಾಪುಗುತ್ತು, ಲೋಕನಾಥ್
ಶೆಟ್ಟಿ ಬಿ.ಸಿ.ರೋಡು, ಉಮೇಶ್ ಸಾಲ್ಯಾನ್ ಬೆಂಜನಪದವು, ಸತೀಶ್ ಭಂಡಾರಿ ಕುಲತ್ತಬೆಟ್ಟು, ಭುವನೇಶ್ ಪಚ್ಚಿನಡ್ಕ, ಪ್ರಕಾಶ್ ಶೆಟ್ಟಿ ಶ್ರೀ ಶೈಲ, ಮಹಾಬಲ ಶೆಟ್ಟಿ ನುಂಗೂರು, ಮುಂಡಾಜೆಗುತ್ತು ಜ್ಯೋತೀಂದ್ರ ಶೆಟ್ಟಿ, ಜನಾರ್ಧನ ಸಾಲ್ಯಾನ್ ದರಿಬಾಗಿಲು, ದಿವಾಕರ ಶೆಟ್ಟಿ ಪರಾರಿ, ರೇಣುಕಾ ದಿವಾಕರ ಪಂಬಂದಬೆಟ್ಟು, ಪ್ರತಿಭಾ ಶೆಟ್ಟಿ ಪಲ್ಲಮಜಲು, ಶಶಿಪ್ರಭ ಗುತ್ತೆತ್ತಿಲ್, ಮಣಿಮಾಲಾ ಬಿ. ಶೆಟ್ಟಿ ನುಂಗೂರು ಮತ್ತಿತರರು ಉಪಸ್ಥಿತರಿದ್ದರು.
ಬ ಳಿಕ ಕುಲಾಲ ಸೇವಾ ಸಂಘ ತುಂಬೆ, ಕುಲಾಲ ಯುವ ವೇದಿಕೆ ಬಂಟ್ವಾಳ, ಶ್ರೀನಿಧಿ ಮಾತೃ ಮಂಡಳಿ ರಾಮನಗರ ಬೆಂಜನಪದವು ಹಾಗೂ ತುಂಬೆ, ರಾಮಲ್ ಕಟ್ಟೆ ಭಾಗದ ಒಟ್ಟು ನೂರಕ್ಕೂ ಅಧಿಕ ಕರಸೇವಕರು ಶ್ರಮಸೇವೆಯಲ್ಲಿ ಭಾಗವಹಿಸಿದರು. ಶನಿವಾರ ಸಂಜೆ ಬಿಎನ್ ಸಿ ಕ್ರಿಕೆಟರ್ಸ್ ಬ್ರಹ್ಮರಕೂಟ್ಲು ಹಾಗೂ ವಿಶ್ವ ಜ್ಯೋತಿ ಯುವಕ ಸಂಘ ವಳವೂರು ಇದರ ಸದಸ್ಯರು ಶ್ರಮಸೇವೆಯಲ್ಲಿ ಭಾಗವಹಿಸಿದ್ದರು.














