ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.)ಬಂಟ್ವಾಳ ಇದರ ತುಂಬೆ ವಲಯದ ಪರಂಗಿಪೇಟೆ ಕಾರ್ಯಕ್ಷೇತ್ರದ ಕುಂಪನವಜಲು ವಾಮನ ಪೂಜಾರಿಯವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಳ ಕಾರ್ಯಕ್ರಮದಡಿ ಕೋಮೊಡು ವೀಲ್ ಚಯರ್ನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭ ಬಂಟ್ವಾಳ ತಾಲೂಕು ತುಂಬೆ ವಲಯದ ಜನಜಾಗೃತಿ ವೇದಿಕೆಯ ಸದಸ್ಯರು ಹಾಗೂ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ, ತುಂಬೆ ವಲಯದ ಮೇಲ್ವಿಚಾರಕಿ
ಮಮತಾ ಸಂತೋಷ್,ಪರಂಗಿಪೇಟೆ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಅಮಿತಾ, ಸೇವಾಂಜಲಿ ಟ್ರಸ್ಟಿ ಸದಸ್ಯರಾದ ಕೇಶವ ಪೂಜಾರಿ ಕಲ್ಲತಡಮೆ ಹಾಗೂ ದಿನೇಶ್ ಪಕ್ಕಲ್ ಪಾದೆ, ಉಪಸ್ಥಿತರಿದ್ದರು.














