ಕಲ್ಲಡ್ಕ: ಶ್ರೀರಾಮ ಪ. ಪೂ. ವಿದ್ಯಾಲಯದಲ್ಲಿ ಆಗತ- ಸ್ವಾಗತ ಕಾರ್ಯಕ್ರಮ

Coastal Bulletin
ಕಲ್ಲಡ್ಕ: ಶ್ರೀರಾಮ ಪ. ಪೂ. ವಿದ್ಯಾಲಯದಲ್ಲಿ ಆಗತ- ಸ್ವಾಗತ ಕಾರ್ಯಕ್ರಮ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆಗತ- ಸ್ವಾಗತ ಕಾರ್ಯಕ್ರಮ ಜರಗಿತು.

ಮಂಗಳೂರಿನ ಖ್ಯಾತ ಮನೋವೈದ್ಯರಾದ ಡಾ.ಸತೀಶ್ ರಾವ್ ವಿದ್ಯಾರ್ಥಿಗಳಲ್ಲಿ ಶಿಕ್ಷಣದೊಂದಿಗೆ ಜೀವನದಲ್ಲಿ ಶಿಸ್ತು, ಮಾನಸಿಕ, ಶಾರೀರಿಕ ಬೆಳವಣಿಗೆ ಅಗತ್ಯ ಎಂದರು. 

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ|ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ,ಪ್ರಾಚೀನ ಕಾಲದ ಶಿಕ್ಷಣ, ಸಂಸ್ಕೃತಿ, ಪರಂಪರೆಯೊಂದಿಗೆ ಸ್ವದೇಶಿ ಚಿಂತನೆಯನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು. 

ಅತಿಥಿಯಾಗಿದ್ದ ಉದ್ಯಮಿ

ಚಂದ್ರಶೇಖರ ತಾಳ್ತಜೆ ತನ್ನ ಬಾಲ್ಯದ ನೆನಪುಗಳನ್ನು ವಿದ್ಯಾರ್ಥಿಗಳಲ್ಲಿ ಹಂಚಿಕೊಂಡರು. ಬೋಳರೋಹಿತ್ ಕುಮಾರ್ ಕಾಮತ್, ಗೀತಾ ಲಕ್ಷ್ಮಿ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಡಾ|ಕಮಲ ಪ್ರಭಾಕರ್ ಭಟ್ ಉಪಸ್ಥಿತರಿದ್ದರು.

 ಪ್ರಾಂಶುಪಾಲರಾದ ವಸಂತ ಬಲ್ಲಾಳ್ ಸ್ವಾಗತಿಸಿ, ವಿದ್ಯಾರ್ಥಿನಿಯರಾದ ಕು.ಪಂಚಮಿ ವಂದಿಸಿದರು, ಕು. ಪ್ರತೀಕ್ಷ ಕಾರ್ಯಕ್ರಮ ನಿರೂಪಿಸಿದರು.

Leave a Comment