ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಕ್ರೂರಿಗಳಿಂದ ಬಲಿಯಾದ ಸೌಜನ್ಯರಿಗೆ ನ್ಯಾಯ ಸಿಗವ ಉದ್ದೇಶದಿಂದ ನಿಂತಿಕಲ್ಲಿನಿಂದ ಸುಳ್ಯದವರೆಗೆ ನಡೆಯಲಿರುವ ಬೃಹತ್ ಕಾಲ್ನಡಿಗೆ ಜಾಥಾಕ್ಕೆ ಚಾಲನೆಯನ್ನು ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ನೀಡಿದರು.
ಈಗಾಗಲೇ ಬೃಹತ್ ಸಂಖ್ಯೆಯಲ್ಲಿ ಜನಸ್ತೋಮ ನಿಂತಿಕಲ್ಲಿನಲ್ಲಿ ಜನ ಸೇರಿದ್ದು, ಸೌಜನ್ಯರವರ ತಾಯಿ ಹಾಗೂ ಮುಖ್ಯ ಅತಿಥಿಗಳನ್ನೊಳಗೊಂಡ ಸಭಾ ಕಾರ್ಯಕ್ರಮ
ಇಂದು ನಡೆಯಲಿದೆ.
ಸುಳ್ಯದ ಪೈಚಾರು ಬಳಿಯಿಂದ ಬೃಹತ್ ಕಾಲ್ನಡಿಗೆ ಜಾಥಾ ನಡೆಯಲಿದೆ. ಈ ಹೋರಾಟದಲ್ಲಿ ಸಮಿತಿಯ ಪದಾಧಿಕಾರಿಗಳು ಜಾಥಾದ ನೇತೃತ್ವ ವಹಿಸಿದ್ದಾರೆ.















