Coastal Bulletin

ಮಂಗಳೂರು :ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಸಿಎಸ್ ವಿದ್ಯಾ ರ್ಥಿನಿ ಕು.ಸವಿತಾ ಶೇಟ್ ಹಾಗೂ ಕಾಲೇಜಿನ ಹಿತೈಷಿಯಾಗಿದ್ದ ಕೊಡಮಣ್ಣ್ ಕಾಂತಪ್ಪ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಸಮರ್ಪಣೆ ಹಾಗೂ ನುಡಿನಮನ ಕಾರ್ಯಕ್ರಮ ಬುಧವಾರ ಕಾಲೇಜಿನ ಸಭಾ ಭವನದಲ್ಲಿ ಜರಗಿತು. ಕಾಲೇಜಿನ ವಿದ್ಯಾ ರ್ಥಿ ಕ್ಷೇಮಪಾಲನಾ ವಿಭಾಗದ ಡೀನ್ ಡಾ .ಪ್ರಿಯಾ ಫ್ರ್ಯಾಂಕ್ ವಿದ್ಯಾರ್ಥಿನಿ ಸವಿತಾ ಕುರಿತು ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ತನ್ನ ಕ್ರಿಯಾ ಶೀಲ ಚಟುವಟಿಕೆಗಳಿಂದ ಜತೆಗಿದ್ದ ಸವಿತಾ ತನ್ನ ಎಳೆಯ ವಯಸ್ಸಿನಲ್ಲೇ ವಿಧಿವಶರಾದದ್ದು ಅತ್ಯಂತ ದುಖಃದಾಯಕ. ಅವರೆಂದಿಗೂ ನಮ್ಮ ಹೃದಯದಲ್ಲಿ ನೆನಪಾಗಿ ಉಳಿಯುತ್ತಾರೆ ಎಂದರು . ಕಂಪ್ಯೂಟರ್ ಸೈನ್ ವಿಭಾ ಗ ಮುಖ್ಯಸ್ಥ ಡಾ.ಸುನೀಲ್ ಕುಮಾರ್ ಸಂತಾಪ ಸಂದೇಶ ನೀಡಿದರು.

ಕಾಲೇಜಿನ ಸಹ ಪ್ರಾಧ್ಯಾಪಕ ಎಂ. ಗಣೇಶ ಕಾಮತ್ ಅವರು ಕೊಡಮಣ್ಣ್ ಕಾಂತಪ್ಪ ಶೆಟ್ಟಿಯವರ ಕುರಿತು ನುಡಿನಮನ ಸಲ್ಲಿಸಿದರು .ಕಾಂತಪ್ಪ ಶೆಟ್ಟಿಯವರು ತಮ್ಮ ಊರಿನ ಜತೆಗೆ ಸಂಘ ಸಂಸ್ಥೆಗಳ ಬಗ್ಗೆ ಹೊಂದಿದ್ದ ಕೌಟುಂಬಿಕ ಕಾಳಜಿಯನ್ನು ಸ್ಮರಿಸಿದ ಅವರು ಕಳೆದ ಐದು ದಶಕಗಳಲ್ಲಿ ಕೆನರಾ ಕಾಲೇಜಿನ ಎನ್ನೆಸ್ಸೆಸ್ ಚಟುವಟಿಕೆಗಳು , ಇಂಜಿನಿಯರಿಂಗ್ ಕಾಲೇಜನ್ನೂ ನಿರಂತರ ಪ್ರೋತ್ಸಾಹಿಸಿಕೊಂಡು ಬಂದ ಅವರ ಕೊಡುಗೆಗಳನ್ನು ನೆನಪಿಸಿಕೊಂಡರು .ಅಗಲಿದ ಆತ್ಮಗಳಿಗೆ ಸದ್ಗತಿ ಕೋರಿ ಮೌನ ಪ್ರಾ ರ್ಥನೆ ಸಲ್ಲಿಸಲಾಯಿತು . 

ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್, ಅಕಾಡೆಮಿಕ್ ಡೀನ್ ಡಾ.ಡೇಮಿಯನ್ ಎ. ಡಿಮೆಲ್ಲೋ ಉಪಸ್ಥಿತರಿದ್ದರು .ಕಾಲೇಜಿನ ಬೋಧಕ, ಬೋಧಕೇತರ ಸಿಬಂದಿ ವರ್ಗ, ವಿದ್ಯಾ ರ್ಥಿಗಳು ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡರು.

Leave a Comment