ಬಂಟ್ವಾಳ :ಪ್ರತಿಷ್ಠಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ರಕ್ತೇಶ್ವರಿ ಯುವಕ ಸಂಘ (ರಿ) ನೆರಂಬೋಳು ಇದರ ರಜತಾ ಸಂಭ್ರಮ 25ನೇ ವರ್ಷದ ವಾರ್ಷಿಕ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಮಹಮ್ಮಾಯಿ ಕ್ಷೇತ್ರ ಕಾರಂಬಡೆ ಇದರ ಆಡಳಿತ ಮೊಕ್ತೇಸರರಾದ ಅರುಣ್ ಕಾರಂಬಡೆ ಇವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಮನೋಹರ್ ನೇರಂಬೋಳು ಅಧ್ಯಕ್ಷ ಹರೀಶ್ ಸದಸ್ಯರಾದ
ಗಣೇಶ್ ಪೂಜಾರಿ ಗೋಪಾಲ್ ಪೂಜಾರಿ ದಯಾನಂದ ಯಶೋಧರ ನೆರಂಬೋಲ್ ಮತ್ತಿತರರು ಉಪಸ್ಥಿತರಿದ್ದರು.














