ಮಲಪ್ಪುರಂ : ಹೌಸ್ ಬೋಟ್ ಮುಳುಗಿ‌ ಕನಿಷ್ಠ 18 ಮಂದಿ ಸಾವು.

Coastal Bulletin
ಮಲಪ್ಪುರಂ : ಹೌಸ್ ಬೋಟ್ ಮುಳುಗಿ‌ ಕನಿಷ್ಠ 18 ಮಂದಿ ಸಾವು.

ಮಲಪ್ಪುರಂ : ಕೇರಳದ ಮಲಪ್ಪುರಂ ಜಿಲ್ಲೆಯ ತನೂರ್ ಪ್ರದೇಶದ ತುವಲ್ತಿರಾಮ್ ಬೀಚ್ ಬಳಿ ಭಾನುವಾರ ಸಂಜೆ ಸಂಭವಿಸಿದ ದೋಣಿ ದುರಂತದಲ್ಲಿ ಕನಿಷ್ಠ 18 ಮಂದಿ ಸಾವನ್ನಪ್ಪಿದ್ದಾರೆ.

ಸುಮಾರು 40 ಪ್ರಯಾಣಿಕರಿದ್ದ ಹೌಸ್ ಬೋಟ್ ಪಲ್ಟಿಯಾಗಿ ಮುಳುಗಿದ ಕಾರಣ ಕನಿಷ್ಠ 18 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ ಹೆಚ್ಚಿನವರು ಮಕ್ಕಳು ಎನ್ನಲಾಗಿದೆ.

ಕೇರಳದ ಕ್ರೀಡಾ ಸಚಿವ ವಿ.ಅಬ್ದುಲ್ ರೆಹಮಾನ್, ಪ್ರವಾಸೋದ್ಯಮ ಸಚಿವ ಪಿ.ಎ ಮೊಹಮ್ಮದ್ ರಿಯಾಸ್ ರಕ್ಷಣಾ ಕಾರ್ಯಾಚರಣೆ ನೇತ್ರತ್ವ ವಹಿಸಿದ್ದಾರೆ. ಹೌಸ್ ಬೋಟ್ ನ್ನು ದಡಕ್ಕೆ ತರುವ ಕಾರ್ಯಾಚರಣೆ ನಡೆದಿದೆ.

ಪೋಲಿಸರ ಮಾಹಿತಿ ಪ್ರಕಾರ, ಭಾನುವಾರ ಸಂಜೆ ಈ ಘಟನೆ ನಡೆದಿದೆ. ಆದರೆ ಈ ದುರಂತಕ್ಕೆ ಇನ್ನೂ ಕಾರಣ ತಿಳಿದುಬಂದಿಲ್ಲ.

Leave a Comment